ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ನಂದಿನಿ ಬಡಾವಣೆಯ ರೇಣು ಸ್ಟುಡಿಯೋವಿನಲ್ಲಿ ಏನೀ ಮುಂಜಾನೆ ತುಂಬಾ ಚಂದಾನೆ ಮಣಿ ಮಣಿ ಹೊಳೆಹೊಳೆದು ಮುತ್ತಿನ ಹಾರಾನೆ.. (ದೊಡ್ಡರಂಗೇಗೌಡ) ಆಗುಂಬೆ ಸಂಜೆಯ ರಂಗನ್ನು ಹೋಲುವ ಓ ನನ್ನ ರನ್ನೆ ನಿನಗಾರು ಸಾಟಿಯೆ, ಹಾಡುವ ಪ್ರೇಮ ರಾಗದಲ್ಲಿ ತೇಲುವ ಹಗುರಾಗಿ ಗಾಳಿಯೊಳಗೆ (ವಿ.ನಾಗೇಂದ್ರ ಪ್ರಸಾದ್) ಗೆಲ್ಲುವೆ ಗೆಲ್ಲುವೆ ಮನಸನ್ನ ಗೆಲ್ಲುವೆ ಕನ್ನಡ ಹಾಡು ಹಾಡಿ ಗೆಲ್ಲುವೆ (ರೂಪಾ ಅಯ್ಯರ್) ಒಂದ್ ಚಾನ್ಸ್ ಕೊಡಿ ಆಕ್ಟ್ ಮಾಡೋಕೆ ರೆಡಿ ಒಂದ್ ಚಾನ್ಸ್ ಕೊಡಿ ಡ್ಯುಯೆಟ್ ಆಡೋಗೆ ರೆಡಿ (ಸತ್ಯಮಿತ್ರ) ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಚಿತ್ರದ ಛಾಯಾಗ್ರಹಣ - ಷ್ಯಾನ್ಪ್ಯಾಡಿ, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ಸಾಹಸ - ಸುಪ್ರೀಂ ಸುಬ್ಬು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ|| ನಂದಿನಿ, ಪ್ರಾರ್ಥನ, ಶೃತಿ, ಮಂಜಯ್ಯ ಚಾವಡಿ, ಮುಂತಾದವರಿದ್ದಾರೆ. ಚಿತ್ರದ ಚಿತ್ರೀಕರಣ ಏಪ್ರಿಲ್ ಮೊದಲವಾರದಲ್ಲಿ.